ಬೆಂಗಳೂರು, ಆಗಸ್ಟ್ 29, 2026: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ ಮಾಡಿರುವ ಕರ್ನಾಟಕ ಸರ್ಕಾರವು ಒಂದೇ ಬಾರಿಗೆ 15 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಶನಿವಾರ ಆದೇಶ ಹೊರಡಿಸಿದೆ.
ನಿಕ್ಕಮ್ ಪ್ರಕಾಶ ಅವರನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರಾಗಿ ಹಾಗೂ ಭೂಷಣ ಬೊರಸೆ ಅವರನ್ನು ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತರಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾಗಿದ್ದ ಎನ್. ಶಶಿಕುಮಾರ ಅವರನ್ನು ಯಾವುದೇ ಹೊಸ ಸ್ಥಳವನ್ನು ತೋರಿಸದೆ ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ಭೂಷಣ ಬೊರಸೆ ಅವರನ್ನು ನೇಮಿಸಲಾಗಿದೆ.
ಇದೇ ವೇಳೆ ನಿಕ್ಕಮ್ ಪ್ರಕಾಶ ಅವರಿಗೆ ಬೆಳಗಾವಿ ನಗರ ಪೊಲೀಸ್ ಆಯುಕ್ತರ ಜವಾಬ್ದಾರಿ ನೀಡಲಾಗಿದೆ. ಈ ಮೂಲಕ ಎರಡೂ ಪ್ರಮುಖ ನಗರಗಳ ಪೊಲೀಸ್ ಆಯುಕ್ತರ ಹುದ್ದೆಗಳಲ್ಲಿ ಬದಲಾವಣೆ ಮಾಡಲಾಗಿದೆ.
ರಾಜ್ಯದ ವಿವಿಧ ಪೊಲೀಸ್ ಘಟಕಗಳು ಮತ್ತು ಜಿಲ್ಲೆಗಳಲ್ಲಿಯೂ ಅಧಿಕಾರಿಗಳ ಹುದ್ದೆ ಬದಲಾವಣೆ ಮಾಡಲಾಗಿದೆ.
ಯಾರಿಗೆ ಎಲ್ಲಿಗೆ ವರ್ಗಾವಣೆ?
ಸರ್ಕಾರದ ವರ್ಗಾವಣೆ ಆದೇಶದಂತೆ ಅಧಿಕಾರಿಗಳ ಹೊಸ ಹುದ್ದೆಗಳು ಹೀಗಿವೆ:
- ಪಿ. ಹರಿಶೇಖರನ್ (ಎಡಿಜಿಪಿ) – ಡಿಸಿಆರ್ಇಗೆ ವರ್ಗಾವಣೆ.
- ನಂಜುಂಡಸ್ವಾಮಿ (ಎಡಿಜಿಪಿ) – ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ವರ್ಗಾವಣೆ.
- ದಿವ್ಯಜ್ಯೋತಿ ರೇ (ಎಡಿಜಿಪಿ) – ಅಪರಾಧ ಮತ್ತು ತಾಂತ್ರಿಕ ವಿಭಾಗಕ್ಕೆ ವರ್ಗಾವಣೆ.
- ಅಮಿತ್ ಸಿಂಗ್ (ಐಜಿಪಿ) – ಕೆಎಸ್ಆರ್ಪಿಗೆ ವರ್ಗಾವಣೆ.
- ಆರ್. ಚೇತನ್ (ಐಜಿಪಿ) – ಪಶ್ಚಿಮ ವಲಯ, ಮಂಗಳೂರಿಗೆ ವರ್ಗಾವಣೆ.
- ನಿಕ್ಕಮ್ ಪ್ರಕಾಶ (ಐಜಿಪಿ) – ಬೆಳಗಾವಿ ನಗರ ಪೊಲೀಸ್ ಆಯುಕ್ತರಾಗಿ ನೇಮಕ.
- ಭೂಷಣ ಬೊರಸೆ (ಡಿಐಜಿಪಿ) – ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತರಾಗಿ ನೇಮಕ.
- ಎನ್. ಶಶಿಕುಮಾರ್ (ಡಿಐಜಿಪಿ) – ಯಾವುದೇ ಹೊಸ ಸ್ಥಳವನ್ನು ತೋರಿಸದೆ ವರ್ಗಾವಣೆ.
- ಶಿವಪ್ರಕಾಶ ದೇವರಾಜ್ (ಎಸ್ಪಿ) – ಮಾದಕದ್ರವ್ಯ ನಿಗ್ರಹ ಪಡೆಗೆ ವರ್ಗಾವಣೆ.
- ಪದ್ಮಿನಿ ಸಾಹು (ಎಸ್ಪಿ) – ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕ.
- ಆರ್. ಶ್ರೀನಿವಾಸಗೌಡ (ಡಿಸಿಪಿ) – ಬೆಂಗಳೂರು ಸಿಸಿಬಿ-1ಕ್ಕೆ ವರ್ಗಾವಣೆ.
- ಡಾ. ಶಿವಕುಮಾರ್ (ಎಸ್ಪಿ) – ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ.
- ಕುಶಲ್ ಚೌಕ್ಸೆ (ಡಿಸಿಪಿ) – ಬೆಂಗಳೂರು ಪೊಲೀಸ್ ಆಡಳಿತ ವಿಭಾಗಕ್ಕೆ ವರ್ಗಾವಣೆ.
- ಸಾಹಿಲ್ ಬಾಗ್ಲಾ (ಎಸ್ಪಿ) – ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕ.
- ರೋಹನ್ ಜಗದೀಶ್ (ಎಸ್ಪಿ) – ಬೆಂಗಳೂರು ದಕ್ಷಿಣ ಜಿಲ್ಲೆಗೆ ವರ್ಗಾವಣೆ.
- ಹೆಚ್.ಎನ್. ಮಿಥುನ್ (ಎಸ್ಪಿ) – ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕ.
ಪ್ರಮುಖ ಬದಲಾವಣೆ
ಈ ವರ್ಗಾವಣೆಯಲ್ಲಿ ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ನಗರ ಪೊಲೀಸ್ ಆಯುಕ್ತರ ಹುದ್ದೆಗಳ ಬದಲಾವಣೆ ವಿಶೇಷ ಗಮನ ಸೆಳೆದಿದೆ. ಹುಬ್ಬಳ್ಳಿ-ಧಾರವಾಡದ ಪೊಲೀಸ್ ಆಯುಕ್ತರಾಗಿದ್ದ ಎನ್. ಶಶಿಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಭೂಷಣ್ ಬೊರಸೆ ಅವರನ್ನು ನೇಮಿಸಲಾಗಿದೆ.
ಇತ್ತ ನಿಕ್ಕಮ್ ಪ್ರಕಾಶ ಅವರು ಬೆಳಗಾವಿ ನಗರ ಪೊಲೀಸ್ ಆಯುಕ್ತರಾಗಿ ಹೊಸ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ವಿವಿಧ ಜಿಲ್ಲೆಗಳು ಮತ್ತು ಪೊಲೀಸ್ ಘಟಕಗಳಲ್ಲಿನ ಈ ಹುದ್ದೆ ಬದಲಾವಣೆಗಳು ರಾಜ್ಯ ಪೊಲೀಸ್ ಇಲಾಖೆಯ ಆಡಳಿತಾತ್ಮಕ ಕಾರ್ಯಚಟುವಟಿಕೆಗಳ ಮೇಲೂ ಪರಿಣಾಮ ಬೀರುವ ನಿರೀಕ್ಷೆಯಿದೆ.