LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
National News

ಬಿಜೆಪಿ ದೇಶದ ಅತಿ ದೊಡ್ಡ ಸಮಸ್ಯೆ: ಅಖಿಲೇಶ ಯಾದವ

ಇಟಾವ, ಆಗಸ್ಟ 29: ದೇಶ ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆ ಬಿಜೆಪಿ ಆಗಿದ್ದು, ದ್ವೇಷ ಹರಡುವುದನ್ನು ಹೊರತುಪಡಿಸಿ ಆಡಳಿತಾರೂಢ ಬಿಜೆಪಿಗೆ ಬೇರೆ ಯಾವುದೇ ಕಾರ್ಯಸೂಚಿಯಿಲ್ಲ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ ಯಾದವ ಶುಕ್ರವಾರ ವಾಗ್ದಾಳಿ ನಡೆಸಿದರು.

ರಕ್ಷಾ ಬಂಧನದ ಅಂಗವಾಗಿ ಉತ್ತರ ಪ್ರದೇಶದ ಇಟಾವ ಜಿಲ್ಲೆಯ ತಮ್ಮ ತವರು ಗ್ರಾಮ ಸೈಫೈಗೆ ಭೇಟಿ ನೀಡಿದ್ದ ಅಖಿಲೇಶ ಯಾದವ, ಸುದ್ದಿಗಾರರೊಂದಿಗೆ ಮಾತನಾಡಿ ಬಿಜೆಪಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

“ದೇಶದಲ್ಲಿ ಒಂದೇ ಒಂದು ದೊಡ್ಡ ಸಮಸ್ಯೆ ಇದೆ. ಅದು ಬಿಜೆಪಿ. ಬಿಜೆಪಿಯೇ ಅತಿ ದೊಡ್ಡ ಸಮಸ್ಯೆಯಾಗಿದ್ದು, ಅದು ಅಧಿಕಾರದಿಂದ ನಿರ್ಗಮಿಸಿದರೆ ಸಮಸ್ಯೆಯೂ ಇಲ್ಲವಾಗುತ್ತದೆ” ಎಂದು ಅವರು ಹೇಳಿದರು.

ಬಿಜೆಪಿಗೆ ದ್ವೇಷ ಹರಡುವುದನ್ನು ಹೊರತುಪಡಿಸಿ ಬೇರೆ ಯಾವುದೇ ಕಾರ್ಯಸೂಚಿಯಿಲ್ಲ ಎಂದು ಆರೋಪಿಸಿದ ಅಖಿಲೇಶ ಯಾದವ, ಸಮಾಜವಾದಿ ನಾಯಕ ಜಯಪ್ರಕಾಶ್ ನಾರಾಯಣ್ ಅವರ ಪರಂಪರೆಯನ್ನು ಬಿಜೆಪಿ ಮಾರಾಟ ಮಾಡುತ್ತಿದೆ ಎಂದು ಟೀಕಿಸಿದರು.

“ಬಿಜೆಪಿ ಸ್ಥಾಪನೆಯಾದ ಸಂದರ್ಭದಲ್ಲಿ ತನ್ನನ್ನು ಸಮಾಜವಾದಿ ಪಕ್ಷ ಎಂದು ಬಿಂಬಿಸಿಕೊಳ್ಳಲು ಜಯಪ್ರಕಾಶ್ ನಾರಾಯಣ್ ಅವರ ಭಾವಚಿತ್ರವನ್ನು ಬಳಸಿಕೊಂಡಿತ್ತು. ಆದರೆ, ಇದೀಗ ಜಯಪ್ರಕಾಶ್ ನಾರಾಯಣ್ ಅಂತಾರಾಷ್ಟ್ರೀಯ ಸಮ್ಮೇಳನ ಕೇಂದ್ರವನ್ನು ಮಾರಾಟ ಮಾಡಿದೆ” ಎಂದು ಅವರು ಆರೋಪಿಸಿದರು.

“ಬಿಜೆಪಿಯನ್ನು ಖರೀದಿಸಲು ಯಾರೂ ಬಯಸುತ್ತಿಲ್ಲ. ಇಲ್ಲದಿದ್ದರೆ ಅದು ತನ್ನನ್ನೇ ಮಾರಾಟ ಮಾಡಿಕೊಳ್ಳುತ್ತಿತ್ತು” ಎಂದು ಅಖಿಲೇಶ ಯಾದವ ವ್ಯಂಗ್ಯವಾಡಿದರು.

ಬೆಲೆ ಏರಿಕೆಗೆ ಬಿಜೆಪಿ ಹೊಣೆ: ಅಖಿಲೇಶ

ಉದ್ಯಮಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಬಿಜೆಪಿ ನೇತೃತ್ವದ ಸರಕಾರ ಅಗತ್ಯ ವಸ್ತುಗಳು ಮತ್ತು ಇಂಧನದ ಬೆಲೆ ಏರಿಕೆಗೆ ಅವಕಾಶ ಮಾಡಿಕೊಡುತ್ತಿದೆ ಎಂದು ಅಖಿಲೇಶ ಯಾದವ ಆರೋಪಿಸಿದರು. ಜನಸಾಮಾನ್ಯರ ಮೇಲಿನ ಬೆಲೆ ಏರಿಕೆಯ ಹೊರೆಯನ್ನು ಕಡಿಮೆ ಮಾಡುವ ಬದಲು ಸರಕಾರವು ಉದ್ಯಮಿಗಳ ಹಿತಾಸಕ್ತಿಗೆ ಆದ್ಯತೆ ನೀಡುತ್ತಿದೆ ಎಂದು ಅವರು ದೂರಿದರು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಿಕ್ಕಮ್ ಪ್ರಕಾಶ ಬೆಳಗಾವಿ, ಭೂಷಣ ಬೊರಸೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾಗಿ ನೇಮಕಮಹಾರಾಷ್ಟ್ರದ ಸರ್ಕಾರಿ ಶಾಲೆಯಲ್ಲಿ ಅವಧಿ ಮೀರಿದ ಆಹಾರ ಪತ್ತೆ₹22,006 ಕೋಟಿ ಸಾಲಕ್ಕೆ ₹6 ಕೋಟಿ ಮರುಪಾವತಿ: ವಿದೇಶಿ ಹೂಡಿಕೆಗೆ ಸುಭಾಷ ಚಂದ್ರ ಸಜ್ಜುಭೂಸ್ವಾಧೀನದಲ್ಲಿ ಮಾನಸಿಕ ನಷ್ಟಕ್ಕೂ ಪರಿಹಾರ ಪಡೆಯುವ ಹಕ್ಕು: ಹೈಕೋರ್ಟನಾಗೇಂದ್ರ ಕಣ್ಣೀರು ಬಿಜೆಪಿಯನ್ನೇ ನಾಶ ಮಾಡಲಿದೆ: ಮಧು ಬಂಗಾರಪ್ಪಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳ ಒತ್ತುವರಿ ತೆರವಿಗೆ ಕ್ರಮ: ಈಶ್ವರ ಖಂಡ್ರೆಬಿಜೆಪಿ ದೇಶದ ಅತಿ ದೊಡ್ಡ ಸಮಸ್ಯೆ: ಅಖಿಲೇಶ ಯಾದವನ್ಯಾಯಾಧೀಶರ ನೇಮಕಾತಿಯಲ್ಲಿ ಕಾರ್ಯಾಂಗದ ಹಸ್ತಕ್ಷೇಪ: ಎಸ್. ಮುರಳೀಧರ ಕಳವಳನೇಪಾಳ: ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್ ಮುಖ್ಯಸ್ಥ ಲ್ಯಾಕ್ಸ ಗೋಪಿ ಸೆಟ್ಟಿ ನಾಪತ್ತೆ₹22,006 ಕೋಟಿ ಸಾಲಕ್ಕೆ ಕೇವಲ ₹6.5 ಕೋಟಿ ಪಾವತಿಗೆ ಬಿಜೆಪಿ ನಿಕಟ ಸುಭಾಷ ಚಂದ್ರಗೆ ಅನುಮತಿ