LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಬೆಳಗಾವಿಗೆ ವಂದೇ ಭಾರತ ರೈಲು; ಪರಿಸರವಾದಿಗಳ ಆಕ್ಷೇಪ

ಬೆಳಗಾವಿ, ೧೫: ಬೆಂಗಳೂರಿನಿಂದ ಬೆಳಗಾವಿಗೆ ಶೀಘ್ರದಲ್ಲೇ ಆರಂಭವಾಗಲಿರುವ ವಂದೇ ಭಾರತ ರೈಲಿಗೆ ಬೆಳಗಾವಿಯ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.



ಧಾರವಾಡದಿಂದ ಖಾನಾಪುರ ಮಾರ್ಗವಾಗಿ ಬೆಳಗಾವಿ ಬರುವ ಈ ರೈಲಿನ ವೇಗ ಹೆಚ್ಚಿದ್ದು ಇದು ದಟ್ಟ ಅರಣ್ಯ ಪ್ರದೇಶದಲ್ಲೇ ಹೋಗುವುದರಿಂದ ವನ್ಯ ಜೀವಿಗಳ ಪ್ರಾಣಕ್ಕೆ ಕುತ್ತು ತರುತ್ತದೆ. ಆದ್ದರಿಂದ ವಂದೇ ಭಾರತ ರೈಲಿನ ವೇಗ ತಗ್ಗಿಸಬೇಕು, ಇಲ್ಲದಿದ್ದರೆ ಪರ್ಯಾಯ ಮಾರ್ಗ ಕಲ್ಪಿಸುವವರೆಗೂ ಈ ರೈಲು ದಟ್ಟ ಅರಣ್ಯದ ಮಾರ್ಗವಾಗಿ ಬೆಳಗಾವಿಗೆ ಬರುವುದು ಬೇಡ ಎಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.



ಇದರ ಬಗ್ಗೆ ಅರಣ್ಯ ಇಲಾಖೆಯ ಅನುಮತಿಯನ್ನು ರೈಲ್ವೆ ಇಲಾಖೆ ಪಡೆಯಬೇಕು ಎನ್ನುವುದೂ ಪರಿಸರವಾದಿಗಳ ವಾದವಾಗಿದೆ.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST