LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಫುಟ್‌ಬೋರ್ಡ್‌ನಲ್ಲಿ ವಿದ್ಯಾರ್ಥಿನಿಯರ ಅಪಾಯಕಾರಿ ಪ್ರಯಾಣ

Advertisement

ಅಥಣಿ, ಜುಲೈ 27: ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಸಮರ್ಪಕ ಬಸ್‌ ಸೌಲಭ್ಯ ಇಲ್ಲದ ಕಾರಣ ಶಾಲೆ ಮತ್ತು ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಪ್ರತಿದಿನ ಜೀವವನ್ನು ಪಣಕ್ಕಿಟ್ಟು ಫುಟ್‌ಬೋರ್ಡ್‌ನಲ್ಲಿ ನೇತಾಡುತ್ತ ಪ್ರಯಾಣಿಸುವ ದುಸ್ಥಿತಿ ಮುಂದುವರಿದಿದೆ.

ಗ್ರಾಮದಿಂದ ಅಥಣಿ ಪಟ್ಟಣಕ್ಕೆ ದಿನಕ್ಕೆ ಒಂದೇ ಬಸ್ ಸಂಚರಿಸುತ್ತಿದ್ದು, ಇದೇ ಬಸ್ ನೂರಾರು ವಿದ್ಯಾರ್ಥಿಗಳ ಏಕೈಕ ಆಸರೆಯಾಗಿದೆ. ಬಸ್ ತಪ್ಪಿದರೆ ಆ ದಿನ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಹಾಜರಾತಿ ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಅಪಾಯವನ್ನು ಲೆಕ್ಕಿಸದೆ ಪ್ರಯಾಣಿಸಲು ಅನಿವಾರ್ಯರಾಗಿದ್ದಾರೆ.

ಪ್ರಯಾಣಿಕರಿಂದ ತುಂಬಿ ತುಳುಕುವ ಬಸ್‌ನ ಫುಟ್‌ಬೋರ್ಡ್ ಮೇಲೆ ಪ್ರೌಢಶಾಲೆ ಮತ್ತು ಕಾಲೇಜಿನ ವಿದ್ಯಾರ್ಥಿನಿಯರು ಸೇರಿದಂತೆ ಹಲವರು ನೇತಾಡುತ್ತ ಸಾಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಚಿಕ್ಕದೊಂದು ಆಯತಪ್ಪಿದರೂ ಭಾರೀ ಅನಾಹುತ ಸಂಭವಿಸುವ ಆತಂಕ ವ್ಯಕ್ತವಾಗಿದೆ.

ಸಾರಿಗೆ ನಿಗಮದ ಅಧ್ಯಕ್ಷ ರಾಜು ಕಾಗೆ ಪ್ರತಿನಿಧಿಸುವ ಕಾಗವಾಡ ಕ್ಷೇತ್ರದ ಪಕ್ಕದಲ್ಲಿರುವ ಅಥಣಿ ಕ್ಷೇತ್ರದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ವಿದ್ಯಾರ್ಥಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸದ ಕಾರಣ ನಿತ್ಯ ಜೀವದ ಹಂಗು ತೊರೆದು ಪ್ರಯಾಣಿಸಬೇಕಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ತಕ್ಷಣವೇ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಿ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸಾರಿಗೆ ಇಲಾಖೆಗೆ ಆಗ್ರಹಿಸಿದ್ದಾರೆ.

news_1785167657_0_937.webp

 

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಂಗಾಳಕೊಲ್ಲಿಯ ಮೇಲೆ ಸಾವಿರ ಕಿ.ಮೀ. ವ್ಯಾಪಿಸಿದ ಮಳೆಮೋಡಗಳ ಕವಚ; ಮುಂಗಾರಿನ ಅಬ್ಬರ ಸೆರೆಹಿಡಿದ ಉಪಗ್ರಹಎಫ್‌ಐಆರ್‌ ಹಿಂಪಡೆಯದಿದ್ದರೆ ಮತ್ತೆ ಬೀದಿಗಿಳಿಯುವ ಎಚ್ಚರಿಕೆಇ–20 ವಿರುದ್ಧ ರಾಷ್ಟ್ರವ್ಯಾಪಿ ಹೋರಾಟಕ್ಕೆ ಎಎಪಿ ಸಜ್ಜು; ಆಗಸ್ಟ್‌ 1ರಂದು ರಾಷ್ಟ್ರೀಯ ಸಮಾವೇಶಬಿಜೆಪಿಗರ ಎದೆ ಸೀಳಿದರೆ ನಾಲ್ಕಕ್ಷರ ಸಿಗುವುದಿಲ್ಲ: ಪ್ರಿಯಾಂಕ್ ಖರ್ಗೆ ತಿರುಗೇಟು‘ಗೋವನ್ನು ರಾಷ್ಟ್ರಮಾತೆ’ ಎಂದು ಘೋಷಿಸಲು ಆಗ್ರಹ: 1.80 ಲಕ್ಷ ಸಹಿಗಳ ಮನವಿ ಸಲ್ಲಿಕೆಅನ್ನಭಾಗ್ಯ ಅಕ್ಕಿ ಕಾಳಸಂತೆಗೆ ಸರ್ಕಾರ ಕಠಿಣ ಕ್ರಮ: ಬೆಳಗಾವಿಯಲ್ಲಿ 32 ಮಂದಿ ಆರೋಪಿಗಳ ಪಟ್ಟಿಭರ್ತಿಗೆ ನಾಲ್ಕು ಅಡಿ ಬಾಕಿ: ರಕ್ಕಸಕೊಪ್ಪ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆಫುಟ್‌ಬೋರ್ಡ್‌ನಲ್ಲಿ ವಿದ್ಯಾರ್ಥಿನಿಯರ ಅಪಾಯಕಾರಿ ಪ್ರಯಾಣಇ–20 ವಿರುದ್ಧ ರಾಷ್ಟ್ರವ್ಯಾಪಿ ಹೋರಾಟಕ್ಕೆ ಎಎಪಿ ಸಜ್ಜು; ಆಗಸ್ಟ್‌ 1ರಂದು ರಾಷ್ಟ್ರೀಯ ಸಮಾವೇಶನಾಳೆಯಿಂದ ಕೃಷ್ಣಾ ಕಾಲುವೆಗಳಿಗೆ ನೀರು; ಅಚ್ಚುಕಟ್ಟು ರೈತರಿಗೆ ಸರ್ಕಾರದ ಸಿಹಿ ಸುದ್ದಿ