LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಆರ್ ಟಿ ಓ ಅಧಿಕಾರಿಗೆ 4 ವರ್ಷ ಶಿಕ್ಷೆ, 63 ಲಕ್ಷ ರೂ. ದಂಡ

ಬೆಳಗಾವಿ : ಭ್ರಷ್ಟಾಚಾರದ ಮೂಲಕ 63 ಲಕ್ಷ ರೂಪಾಯಿ ಹಣ ಸಂಪಾದಿಸಿದ್ದ ಬೀದರ್ ಸಾರಿಗೆ ವಿಭಾಗದ ಅಧಿಕಾರಿಗೆ ಬೆಳಗಾವಿಯ ನ್ಯಾಯಾಲಯ ನಾಲ್ಕು ವರ್ಷ ಜೈಲು ಶಿಕ್ಷೆ ಮತ್ತು 63 ಲಕ್ಷ ದಂಡ ವಿಧಿಸಿದೆ.



ಬೆಳಗಾವಿಯ 4ನೇ ಅಧಿಕ ಸತ್ರ ವಿಶೇಷ ನ್ಯಾಯಾಲಯದ ನ್ಯಾಯಧೀಶ ನಾರಾಯಣ ಪ್ರಭು ಬೀದರ್ ಜಿಲ್ಲೆಯ ಹುಮನಾಬಾದದ ಸಾರಿಗೆ ಇಲಾಖೆಯ ಸಹಾಯಕ ಸಾರಿಗೆ ಅಧಿಕಾರಿಯಾಗಿದ್ದ ಪಿ ಶಾಂತಕುಮಾರ ಮುನಿಸ್ವಾಮಿ ಎಂಬುವರಿಗೆ ಶಿಕ್ಷೆ ವಿಧಿಸಿದ್ದಾರೆ.



ಶಾಂತಕುಮಾರ ತಮ್ಮ ಆದಾಯಕ್ಕಿಂತ ಹೆಚ್ಚು ಹಣವನ್ನು ಭ್ರಷ್ಟಾಚಾರದ ಮೂಲಕ ಅಕ್ರಮವಾಗಿ ಸಂಪಾದಿಸಿರುವದನ್ನು ಗುಪ್ತ ಮಾಹಿತಿ ಮೂಲಕ ಕಲೆಹಾಕಿದ್ದ ಬೆಳಗಾವಿಯ ಲೋಕಾಯುಕ್ತ ವಿಭಾಗ 03-05-2010ರಂದು ಅವರ ಬೀದರನ ಮನೆ ಮತ್ತು ಕಛೇರಿ ಮತ್ತು ಬೆಳಗಾವಿಯ ಆಂಜನೇಯ ನಗರದ ಮನೆಯ ಮೇಲೆ ದಾಳಿ ಮಾಡಿ ಅವರು 1 ಕೋಟಿ 14 ಲಕ್ಷ 62 ಸಾವಿರದ 121 ರೂಪಾಯಿ ಗಳಿಸಿರುವದು ಪತ್ತೆ ಹಚ್ಚಿ ಇದರಲ್ಲಿ 63 ಲಕ್ಷ ಭ್ರಷ್ಟಾಚಾರದಿಂದ ಹೊಂದಿರುವುದು ತನಿಖೆಯಿಂದ ತಿಳಿದು ಬಂದಿತ್ತು.



ಈ ಬಗ್ಗೆ ಬೆಳಗಾವಿಯ ನ್ಯಾಯಾಲಯದಲ್ಲಿ ದೋಷರೋಪ ಪಟ್ಟಿ ಸಲ್ಲಿಸಿತ್ತು. ಬೆಳಗಾವಿಯ ಲೋಕಾಯುಕ್ತ ಪೊಲೀಸ್ ಇನ್ಸಪೆಕ್ಟರ್ ಗಳಾದ ಆರ್ ಕೆ ಪಾಟೀಲ ಮತ್ತು ನಂತರ ಆರ್ ಬಿ ಹವಾಲ್ದಾರ ತನಿಖೆ ಕೈಗೊಂಡಿದ್ದರು.



ಶಿಕ್ಷೆ ಮತ್ತು ದಂಡಕ್ಕೊಳಗಾಗಿರುವ ಶಾಂತಕುಮಾರ ದಂಡ ಕಟ್ಟಲು ವಿಫಲವಾದರೆ ಅವರ ಮತ್ತು ಅವರ ಪತ್ನಿಯ ಹೆಸರಿನಲ್ಲಿರುವ ಚರ ಮತ್ತು ಸ್ಥಿರಾಸ್ತಿ ಮಾರಾಟ ಮಾಡಿ ಹಣ ಹೊಂದಿಸಲು ನ್ಯಾಯಾಲಯ ಆದೇಶಿಸಿದೆ.



ಸರಕಾರದ ಪರವಾಗಿ ಪ್ರವೀಣ ಅಗಸಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು ಎಂದು ಬೆಳಗಾವಿ ಲೋಕಾಯುಕ್ತ ಪೊಲೀಸ್ ಕಮಿಷನರ್ ಯಶೋದಾ ವಂಟಿಗುಡಿ ತಿಳಿಸಿದ್ದಾರೆ.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವ ಉಳಿಸಿದ ಮಾನವೀಯತೆ : ದಿಲ್ಲಿ ಅಗ್ನಿ ದುರಂತದಲ್ಲಿ ಮುಸ್ಲಿಂ ಯುವಕರ ಸಾಹಸಕ್ಕೆ ವ್ಯಾಪಕ ಮೆಚ್ಚುಗೆರೌಡಿಸಂಗೆ ಕಠಿಣ ಕಡಿವಾಣ: ಪ್ರತಿ ತಾಲ್ಲೂಕಿನಲ್ಲಿ ವಿಶೇಷ ನಿಗಾ ಪಡೆರಾಹುಲ್‌ ಗಾಂಧಿ-ಸಿದ್ದರಾಮಯ್ಯ ರಿಮೋಟ್‌ ಕಂಟ್ರೋಲ್‌ ಸರಕಾರ : ಆರ್‌.ಅಶೋಕಉ.ಪ್ರ. ವಿಧಿವಿಜ್ಞಾನ ಪ್ರಯೋಗಾಲಯಗಳ ದುಸ್ಥಿತಿಯಿಂದ ಕೊಲೆ, ಅತ್ಯಾಚಾರ ಆರೋಪಿಗಳಿಗೆ ಜಾಮೀನು: ಅಲಹಾಬಾದ ಹೈಕೋರ್ಟ ತೀವ್ರ ಕಳವಳಬೆಳಗಾವಿ : ಆದಿತ್ಯರಾಜ ಕ್ಯಾಪಿಟಲ್ ಮೇಲೆ ಅಧಿಕಾರಿಗಳ ದಾಳಿಟ್ರಂಪ್‌ಗೆ ಹಿನ್ನಡೆ : ಇರಾನ್ ಯುದ್ಧ ಅಂತ್ಯಗೊಳಿಸಲು ಅಮೆರಿಕ ಪ್ರತಿನಿಧಿಗಳ ಸಭೆ ನಿರ್ಣಯ ಅಂಗೀಕಾರಕೇರಳಕ್ಕೆ ಮುಂಗಾರು ಪ್ರವೇಶ: ಭಾರಿ ಮಳೆ ಮುನ್ಸೂಚನೆಕಾಂಗ್ರೆಸ್ ಹೈಕಮಾಂಡಗೆ ಹರಿಪ್ರಸಾದ ಕೃತಜ್ಞತೆಡಿ.ಕೆ. ಶಿವಕುಮಾರ ಪದಗ್ರಹಣಕ್ಕೆ ಕ್ಷಣಗಣನೆಹಿಂದೂ ಮಹಿಳೆ ಅಪಹರಣದ ಸುಳ್ಳು ಕಥೆ ಹೆಣೆದು ಮುಸ್ಲಿಂ ಯುವಕರನ್ನು ಸಿಲುಕಿಸಲು ಯತ್ನ, ಆರೋಪಿ ಪರಾರಿ