LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ರಾಷ್ಟ್ರಗೀತೆ ಮೊಳಗಿಸಿ ಪ್ರತಿಭಟನೆ: ಹೊಸ ಶೈಲಿ ವೈರಲ್

ಹೊಸದಿಲ್ಲಿ, ಜುಲೈ 23: ಕಾಕ್ರೋಚ್‌ ಜನತಾ ಪಕ್ಷ (ಸಿಜೆಪಿ) ನೇತೃತ್ವದಲ್ಲಿ ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ಜಂತರ್‌ ಮಂತರ್‌ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿದಿದೆ. ಪೊಲೀಸ್ ಬಲಪ್ರಯೋಗ, ಬಂಧನಗಳು ಹಾಗೂ ಸರ್ಕಾರದ ಮನವಿಗಳ ನಡುವೆಯೂ ಯುವ ಸಮೂಹ ಧರಣಿಯನ್ನು ಮುಂದುವರಿಸಿದ್ದು, ಪ್ರತಿಭಟನೆಯ ವಿಭಿನ್ನ ಶೈಲಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿವೆ.

ಪ್ರತಿಭಟನೆಯ ವೇಳೆ ಪೊಲೀಸರು ಲಾಠಿಚಾರ್ಜ್ ನಡೆಸಿದರೂ ಹಾಗೂ ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರೂ ಪ್ರತಿಭಟನಾಕಾರರು ಹಿಂತಿರುಗದೆ ವಿವಿಧ ರೀತಿಯ ಸಾಂಕೇತಿಕ ಪ್ರತಿಭಟನೆಗಳನ್ನು ನಡೆಸಿದರು. ವಿಶೇಷವಾಗಿ ಜೆನ್ ಝೀ ಪೀಳಿಗೆಯ ವಿದ್ಯಾರ್ಥಿಗಳು ವಿಭಿನ್ನ ರೀತಿಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿರುವ ದೃಶ್ಯಗಳು ವೈರಲ್ ಆಗಿವೆ.

ವೈರಲ್ ಆಗಿರುವ ವಿಡಿಯೊವೊಂದರಲ್ಲಿ ಲಖನೌ ಮೂಲದ ಯುವಕ ಜಿರಳೆ (ಕಾಕ್ರೋಚ್‌) ವೇಷ ಧರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದು ಕಂಡುಬಂದಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಆತ, ತಾನು ವೈದ್ಯಕೀಯ ವಿದ್ಯಾರ್ಥಿಯಾಗಿದ್ದು, ಕಾಕ್ರೋಚ್‌ ಜನತಾ ಪಕ್ಷದ ಬೆಂಬಲಕ್ಕಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾಗಿ ಹೇಳಿದ್ದಾನೆ.

ಮತ್ತೊಂದು ವಿಡಿಯೊದಲ್ಲಿ ಯುವಕನೊಬ್ಬ ರಸ್ತೆ ಮಧ್ಯೆಯೇ ಸೊಳ್ಳೆ ಪರದೆ ಹಾಕಿಕೊಂಡು ಅದರೊಳಗೆ ಕುಳಿತು ಮೊಬೈಲ್‌ನಲ್ಲಿ ಸಾಮಾಜಿಕ ಜಾಲತಾಣ ವೀಕ್ಷಿಸುತ್ತಿರುವ ದೃಶ್ಯ ಕಂಡುಬಂದಿದೆ. ಕೆಲ ವಿದ್ಯಾರ್ಥಿಗಳು ರಸ್ತೆ ಮಧ್ಯೆಯೇ ರೀಲ್ಸ್‌ ವಿಡಿಯೊಗಳನ್ನು ಚಿತ್ರೀಕರಿಸಿರುವ ದೃಶ್ಯಗಳೂ ಹರಿದಾಡುತ್ತಿವೆ.

ಇನ್ನೊಂದು ವೈರಲ್ ವಿಡಿಯೊದಲ್ಲಿ ಪೊಲೀಸರು ಪ್ರತಿಭಟನಾಕಾರರತ್ತ ಮುನ್ನಡೆಯುತ್ತಿದ್ದಂತೆ ವಿದ್ಯಾರ್ಥಿಗಳು ರಾಷ್ಟ್ರಗೀತೆಯನ್ನು ಹಾಡಲು ಆರಂಭಿಸಿರುವುದು ಕಂಡುಬಂದಿದೆ. ಈ ದೃಶ್ಯವನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಕೆಲವರು ವ್ಯಂಗ್ಯಾತ್ಮಕವಾಗಿ ಕಾಮೆಂಟ್‌ಗಳನ್ನೂ ಮಾಡಿದ್ದಾರೆ.

ಇದರ ಜೊತೆಗೆ, ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್‌ಗಳ ಮೇಲೆ ಹತ್ತಿ ಆಟವಾಡುವುದು, ಬ್ಯಾರಿಕೇಡ್‌ಗಳನ್ನು ನೆಟ್‌ನಂತೆ ಬಳಸಿಕೊಂಡು ಶೆಟಲ್‌ಕಾಕ್ ಆಡುವುದು ಸೇರಿದಂತೆ ವಿವಿಧ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿವೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇಶದಲ್ಲಿ ಶುದ್ಧ ಪೆಟ್ರೋಲ್ ಮರುಪೂರೈಕೆ ಇಲ್ಲ; ಇ–20 ಮುಂದುವರಿಕೆನೀಟ್‌ ಅಕ್ರಮ ವಿರುದ್ಧ ಮಹಾರಾಷ್ಟ್ರ ಬಂದ್‌ಗೆ ವ್ಯಾಪಕ ಪ್ರತಿಕ್ರಿಯೆ; ಸಾವಿರಾರು ಕಾರ್ಯಕರ್ತರ ವಶ, ಹಲವು ಕಡೆ ಪ್ರತಿಭಟನೆಪ್ರಧಾನಿ ನಿವಾಸದ ಪ್ರತಿಭಟನೆ ಬದಲು ವಿದ್ಯಾರ್ಥಿಗಳ ಜೊತೆ ನಿಲ್ಲಬೇಕಿತ್ತು: ಕಾಂಗ್ರೆಸ್ ನಡೆ ಬಗ್ಗೆ ವಾಂಗಚುಕ್‌ ಪತ್ನಿ ಟೀಕೆಸಿಜೆಪಿ ಪ್ರತಿಭಟನೆಗೆ ಅಡ್ಡಿಪಡಿಸಲು ಬಿಜೆಪಿಯಿಂದ ‘ಗೂಂಡಾಗಳ’ ಬಳಕೆ: ಅಭಿಜೀತ ದೀಪ್ಕೆ ಆರೋಪನೀಟ್ ವಿವಾದಕ್ಕೆ ಉಭಯ ಸದನ ಕಲಾಪ ನಾಲ್ಕನೇ ದಿನವೂ ಮುಂದೂಡಿಕೆಮಳೆ ಹನಿಗಳೊಂದಿಗೆ ಅರಳಿದ ಅಳ್ನಾವರ: ಹಸಿರಿನ ಸೊಬಗು, ರೈತರ ಸಂಭ್ರಮಪ್ರಧಾನಿ ನಿವಾಸದ ಎದುರಿನ ಪ್ರತಿಭಟನೆ ಖಂಡಿಸಿ ಬಿಜೆಪಿಯಿಂದ ಮೆರವಣಿಗೆಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಬೆಳಗಾವಿಯ ಸ್ವಾತಿಕ್ ಪಾಟೀಲ ಆಯ್ಕೆನೀಟ್‌ ಅಕ್ರಮ ಖಂಡಿಸಿ ಬೆಳಗಾವಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ; ಪ್ರಧಾನ್‌ ರಾಜೀನಾಮೆಗೆ ಆಗ್ರಹವಿದ್ಯಾರ್ಥಿಗಳ ರಕ್ಷಣೆಗೆ ಪೊಲೀಸ್ ವ್ಯಾನ್‌ ತಡೆದ ಯುವತಿ; ರಿಯಾ ಅಹಿರ್‌ ಧೈರ್ಯಕ್ಕೆ ಮೆಚ್ಚುಗೆ