LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Local News

ಚಿರತೆ ಸುಳಿವಿಲ್ಲ : ಸೋಮವಾರದಿಂದ ಶಾಲೆಗಳು ಪುನಾರಂಭ

ಬೆಳಗಾವಿ : ಒಂದು ವಾರದಿಂದ ಚಿರತೆ ಗಾಲ್ಫ ಕೋರ್ಸ ಮತ್ತು ಸುತ್ತಲಿನ ಪ್ರದೇಶದಲ್ಲಿ ಕಂಡು ಬಾರದ್ದರಿಂದ ಶಿಕ್ಷಣ ಇಲಾಖೆಯು ಸೋಮವಾರದಿಂದ ಶಾಲೆಗಳನ್ನು ಪುನಃ ಪ್ರಾರಂಭಿಸಲು ತೀರ್ಮಾನಿಸಿದೆ.



ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಬಸವರಾಜ ನಲತವಾಡ, ಚಿರತೆ ಕಾರ್ಯಾಚರಣೆ ನಡೆಸುತ್ತಿದ್ದ ತಂಡ ಚಿರತೆ ಗಾಲ್ಫ ಕೋರ್ಸ ಮತ್ತು ಸುತ್ತಲಿನ ಪ್ರದೇಶ ಬಿಟ್ಟು ಹೋಗಿದೆ. ಅದರ ಪತ್ತೆಗಾಗಿ ಅಳವಡಿಸಲಾಗಿರುವ ಯಾವುದೇ ಕ್ಯಾಮೆರಾದಲ್ಲೂ ಕಳೆದ ಹತ್ತು ದಿನಗಳಿಂದ ಅದು ಪತ್ತೆ ಆಗಿಲ್ಲ. ಚಿರತೆ ಪತ್ತೆಗಾಗಿ ಗಾಲ್ಫ ಕೋರ್ಸ್ ನ ಪ್ರತಿ ಗಿಡ ಮರದ ಇಂಚ್ಚಿಂಚೂ ಜಾಗ ಹುಡುಕಲಾಗಿದೆ, ಎಲ್ಲಿಯೂ ಅದು ಚಿರತೆ ಕಂಡು ಬಂದಿಲ್ಲ.







ಹೀಗಾಗಿ ಚಿರತೆ ಪ್ರದೇಶ ಬಿಟ್ಟು ತೆರಳಿದೆ ಎಂಬ ನಿರ್ಧಾರಕ್ಕೆ ಬಂದು ಮುಚ್ಚಿರುವ ಶಾಲೆ ಪುನಃ ತೆರೆಯಬಹುದು ಎಂಬ ಅಭಿಪ್ರಾಯ ಸೂಚಿಸಲಾಗಿದೆ ಎಂಬ ಮೌಖಿಕ ಹೇಳಿಕೆಯನ್ವಯ ಶಾಲೆಗಳನ್ನು ಸೋಮವಾರದಿಂದ ಪುನಃ ಆರಂಭಿಸಲು ನಿರ್ಧರಿಸಲಾಗಿದೆ ಎಂದರು.







ಪಾಲಕರು ಮಕ್ಕಳನ್ನು ಶಾಲೆಗೆ ತಂದು ಬಿಡುವಾಗ ಮರಳಿ ಕರೆದುಕೊಂಡು ಹೋಗುವಾಗ ಎಚ್ಚರಿಕೆಯಾಗಿರಬೇಕು. ಮಕ್ಕಳು ಶಾಲೆಯಲ್ಲಿರುವಾಗ ಅವರ ಸುರಕ್ಷತೆ ಇರುತ್ತದೆ. ಯಾವುದೇ ಮಕ್ಕಳನ್ನು ಶಾಲೆ ಮುಗಿಯುವವರೆಗೆ ಹೊರಗೆ ಕಳುಹಿಸುವಂತಿಲ್ಲ, ಬಿಡುವಿನ ಅವಧಿಯಲ್ಲಿ ಶಿಕ್ಷಕರೇ ಮಕ್ಕಳನ್ನು ಗುಂಪಿನಲ್ಲಿ ಮೂತ್ರ ವಿಸರ್ಜನೆಗೆ ಕರೆದುಕೊಂಡು ಹೋಗಬೇಕು, ಕುಡಿಯುವ ನೀರನ್ನು ತರಗತಿಯೊಳಗೇ ಇಟ್ಟುಕೊಂಡಿರಬೇಕು. ಬಾಗಿಲು ಕಿಟಕಿಗಳನ್ನು ಹಾಕಿಕೊಂಡಿರಬೇಕು ಎಂಬ ಸೂಚನೆಗಳನ್ನು ನೀಡಲಾಗಿದೆ ಎಂದು ತಿಳಿಸಿದರು.



ಚಿರತೆ ಕಂಡು ಬಂದ ಹಿನ್ನಲೆಯಲ್ಲಿ ಬೆಳಗಾವಿ ನಗರದ ಮತ್ತು ಗ್ರಾಮೀಣ ವಲಯದ ಹನ್ನೊಂದು ಶಾಲೆಗಳಿಗೆ ಕಳೆದ ಆಗಸ್ಟ 7ರಿಂದ ರಜೆ ನೀಡಲಾಗಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಮಿತ ಶಾ ಭೇಟಿ : ಬೆಳಗಾವಿ ವಿಮಾನ ನಿಲ್ದಾಣದ ಸುತ್ತ 2 ಕಿ.ಮೀ. ‘ರೆಡ್ ಝೋನ್–ನೋ ಫ್ಲೈ ಝೋನ್’ಗಣೇಶ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ ಕಲ್ಲುತೂರಾಟ ಆರೋಪಯುಪಿಐ ಶುಲ್ಕಕ್ಕೆ ಅಖಿಲೇಶ ಯಾದವ ಆಕ್ರೋಶದೇಶದ ಇಂಧನ ಭದ್ರತೆ ಕಾಪಾಡಲು ಬದ್ಧಈಶ್ವರಪ್ಪ, ಯತ್ನಾಳ ಅವರನ್ನು ಬಿಜೆಪಿಗೆ ಮರಳಿ ಕರೆತರಬೇಕು: ನಿರಾಣಿ₹50 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಧಾರವಾಡ ತಹಶೀಲ್ದಾರಜಾಗತಿಕ ಚಿಪ್ ಉತ್ಪಾದನೆಯ ವಿಶ್ವಾಸಾರ್ಹ ಕೇಂದ್ರವಾಗುತ್ತಿದೆ ಭಾರತ: ಮೋದಿಬರಪೀಡಿತ ಪಟ್ಟಿಗೆ ಮತ್ತೂ 23 ತಾಲೂಕು; ಒಟ್ಟು 124ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರುಗನ್ ತೋರಿಸಿ ಬೆದರಿಸಿ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ: ಮಾಜಿ ಶಾಸಕ ಸೇರಿ ಇಬ್ಬರ ವಿರುದ್ಧ ಪ್ರಕರಣ