ಹೊಸದಿಲ್ಲಿ, ಜುಲೈ 25: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ದೇಶಾದ್ಯಂತ ನಡೆದ ನಿರಂತರ ವಿದ್ಯಾರ್ಥಿ ಪ್ರತಿಭಟನೆ ಹಾಗೂ ಜಂತರ್ ಮಂತರ್ನಲ್ಲಿ ಸಮಾಜಸೇವಕ ಸೋನಮ್ ವಾಂಗ್ಚುಕ ನಡೆಸಿದ 26 ದಿನಗಳ ಉಪವಾಸ ಸತ್ಯಾಗ್ರಹದ ಬಳಿಕ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿದುಬಂದಿದೆ.
ಈ ಬೆಳವಣಿಗೆ ಕುರಿತು ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಸೋನಮ್ ವಾಂಗ್ಚುಕ, ಇದನ್ನು ಭಾರತದ ನೇರ ನಾಗರಿಕ ಕ್ರಿಯೆಯ ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿದ್ದು, ದೇಶದ ಯುವಜನತೆ ಮತ್ತು ನಾಗರಿಕರ ದೃಢ ಸಂಕಲ್ಪವನ್ನು ಶ್ಲಾಘಿಸಿದ್ದಾರೆ.
"ಇದು ಪ್ರಜಾಪ್ರಭುತ್ವದ ಗೆಲುವು. ಇದು ನೇರ ಪ್ರಜಾಪ್ರಭುತ್ವದ ವಿಜಯ. ಬೀದಿಗಳಿಂದಲೇ ಮೂಡಿಬಂದ ಜನಶಕ್ತಿಯ ಫಲ ಇದು. ಶಾಂತಿ, ತಾಳ್ಮೆ ಮತ್ತು ನಿರಂತರ ಪರಿಶ್ರಮಕ್ಕೆ ಸಂದ ಜಯವಾಗಿದೆ. ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಹಾಗೂ ದೇಶದ ಜೆನ್–ಝಡ್ ಯುವಜನತೆಗೆ ಅಭಿನಂದನೆಗಳು. ಭಯವನ್ನು ಮೀರಿ ದೇಶದ ಮೂಲೆಮೂಲೆಗಳಿಂದ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಎಲ್ಲ ನಾಗರಿಕರಿಗೂ ಧನ್ಯವಾದಗಳು. ಈಗ ಹೊಣೆಗಾರಿಕೆಯಿಂದ ಸುಧಾರಣೆಗಳತ್ತ ಹೆಜ್ಜೆ ಇಡುವ ಸಮಯ ಬಂದಿದೆ," ಎಂದು ಅವರು ಪೋಸ್ಟ್ ಮಾಡಿದ್ದಾರೆ.
