LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ರಾಷ್ಟ್ರೀಯ ಭದ್ರತೆ ಕಾರಣ ಕಾಕ್ರೋಚ್‌ ಜನತಾ ಪಕ್ಷ ಎಕ್ಸ ಖಾತೆ ನಿರ್ಬಂಧ

ಹೊಸದಿಲ್ಲಿ, ಮೇ 22 : ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್‌ ಅವರ ಹೇಳಿಕೆ ವಿರುದ್ಧ ಆರಂಭಗೊಂಡಿದ್ದ ಕಾಕ್ರೋಚ್‌ ಜನತಾ ಪಕ್ಷ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಇದೀಗ ಅದರ ಎಕ್ಸ್‌ ಖಾತೆಯನ್ನು ಭಾರತದಲ್ಲಿ ತಡೆಹಿಡಿಯಲಾಗಿದೆ.

ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಉಂಟುಮಾಡುವ ಪ್ರಚೋದನಕಾರಿ ವಿಷಯಗಳನ್ನು ಪೋಸ್ಟ್‌ ಮಾಡಲಾಗಿದೆ ಎಂಬ ಆರೋಪದಡಿ ಕೇಂದ್ರ ಸರಕಾರದ ಸೂಚನೆಯಂತೆ ಗುರುವಾರ ಖಾತೆ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.

ಗುಪ್ತಚರ ಇಲಾಖೆಯಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್‌ 69ಎ ಅಡಿಯಲ್ಲಿ ಖಾತೆ ತಡೆಹಿಡಿಯುವಂತೆ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಎಕ್ಸ್‌ಗೆ ನಿರ್ದೇಶನ ನೀಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯುವಜನರಲ್ಲಿ ಈ ಖಾತೆಗೆ ವೇಗವಾಗಿ ಜನಪ್ರಿಯತೆ ಹೆಚ್ಚುತ್ತಿದ್ದು, ಅದು ಭಾರತದ ಸಾರ್ವಭೌಮತ್ವ ಮತ್ತು ಭದ್ರತೆಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಖಾತೆಯ ಅನುಯಾಯಿಗಳ ಸಂಖ್ಯೆ ದಿನದಿಂದ ದಿನಕ್ಕೆ ವೇಗವಾಗಿ ಏರಿಕೆಯಾಗುತ್ತಿತ್ತು. ಸುಮಾರು 90 ಸಾವಿರ ಅನುಯಾಯಿಗಳಾಗುತ್ತಿದ್ದಂತೆಯೇ ಖಾತೆ ತಡೆಹಿಡಿಯುವಂತೆ ಎಕ್ಸ್‌ಗೆ ಮನವಿ ಮಾಡಲಾಗಿತ್ತು. ಗುರುವಾರ ಸಂಜೆ ವೇಳೆಗೆ ಜಾಗತಿಕವಾಗಿ 2 ಲಕ್ಷಕ್ಕೂ ಅಧಿಕ ಅನುಯಾಯಿಗಳನ್ನು ಖಾತೆ ಹೊಂದಿದೆ ಎಂದು ವರದಿಯಾಗಿದೆ.

ಭಾರತದಲ್ಲಿ ಖಾತೆ ನಿರ್ಬಂಧಗೊಂಡಿದ್ದರೂ, ಎಕ್ಸ್‌ನ ನಿಯಮಾವಳಿಗಳ ಪ್ರಕಾರ ಇತರ ದೇಶಗಳಲ್ಲಿ ಅದನ್ನು ವೀಕ್ಷಿಸಲು ಅವಕಾಶ ಇದೆ ಎನ್ನಲಾಗಿದೆ.

ಇನ್‌ಸ್ಟಾಗ್ರಾಂ ಖಾತೆಯನ್ನು ಇನ್ನೂ ಭಾರತದಲ್ಲಿ ನಿರ್ಬಂಧಿಸಲಾಗಿಲ್ಲ. ಆದರೆ, ಅದನ್ನು ತಡೆಹಿಡಿಯುವ ಪ್ರಕ್ರಿಯೆಯೂ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ಸಂಜೆ ವೇಳೆಗೆ ಆ ಖಾತೆಗೆ 16 ಲಕ್ಷಕ್ಕೂ ಅಧಿಕ ಅನುಯಾಯಿಗಳಿದ್ದರು ಎಂದು ವರದಿಯಾಗಿದೆ.

ಭಾರತದಲ್ಲಿ ಕಾಕ್ರೋಚ್‌ ಜನತಾ ಪಕ್ಷ ಖಾತೆ ತಡೆಹಿಡಿಯಲಾಗಿದೆ ಎಂದು ದಿಪ್ಕೆ ಗುರುವಾರ ಮಧ್ಯಾಹ್ನ ಪೋಸ್ಟ್‌ ಮಾಡಿದ್ದರು. ಕೆಲವೇ ಗಂಟೆಗಳ ಬಳಿಕ ಕಾಕ್ರೋಚ್‌ ಇಸ್‌ ಬ್ಯಾಕ್‌ ಎಂಬ ಹೊಸ ಖಾತೆ ಆರಂಭಿಸಿರುವುದಾಗಿ ಘೋಷಿಸಿದ್ದರು.

30 ವರ್ಷದ ದಿಪ್ಕೆ ಮೂಲತಃ ಮಹಾರಾಷ್ಟ್ರದವರಾಗಿದ್ದು, ಪ್ರಸ್ತುತ ಅಮೆರಿಕದ ಬೋಸ್ಟನ್‌ನಲ್ಲಿ ನೆಲೆಸಿದ್ದಾರೆ. ಭಾರತದ ನಿರುದ್ಯೋಗಿ ಯುವಕರ  ಕುರಿತು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ ನೀಡಿದ್ದ ಹೇಳಿಕೆಗಳ ಬಳಿಕ ಈ ವಿಡಂಬನಾ ಖಾತೆ ಆರಂಭಿಸಲಾಗಿತ್ತು. ಆ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದವು.

 

 

 

 

 

 

 

 

 

 

 

 

 

 

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೀಟ್‌-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಮರುಕಳಿಸದು : ಮತ್ತೆ ಭರವಸೆ ನೀಡಿದ ಧರ್ಮೇಂದ್ರ ಪ್ರಧಾನನೀಟ್‌-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ : ಧರ್ಮೇಂದ್ರ ಪ್ರಧಾನ ರಾಜೀನಾಮೆಗೆ ಕಾಕ್ರೋಚ್‌ ಜನತಾ ಪಕ್ಷದ ಆನ್‌ಲೈನ್‌ ಅಭಿಯಾನಮೌಂಟ್‌ ಎವರೆಸ್ಟ ಇಳಿಯುವಾಗ ಇಬ್ಬರು ಭಾರತೀಯ ಪರ್ವತಾರೋಹಿಗಳ ಸಾವುರಾಷ್ಟ್ರೀಯ ಭದ್ರತೆ ಕಾರಣ ಕಾಕ್ರೋಚ್‌ ಜನತಾ ಪಕ್ಷ ಎಕ್ಸ ಖಾತೆ ನಿರ್ಬಂಧಕಾಕ್ರೋಚ್‌ ಹೀಗೆ ಮಾವು ತಿನ್ನುತ್ತವೆ ಎಂದು ಪ್ರಧಾನಿ ಮೋದಿ ವಿರುದ್ಧ ನಟ ಪ್ರಕಾಶ ವ್ಯಂಗ್ಯ ವಿಡಿಯೋ ವೈರಲ್‌ದ್ವೇಷ ರಾಜಕಾರಣ ಬೇಡ; ಭಾರತೀಯ ಕುಸ್ತಿ ಒಕ್ಕೂಟಕ್ಕೆ ದಿಲ್ಲಿ ಹೈಕೋರ್ಟ ತೀವ್ರ ತರಾಟೆ : ವಿನೇಶ ಫೋಗಟ್‌ ಅನರ್ಹತೆಗೆ ನಿರ್ಧಾರಕ್ಕೆಬೆಂಗಳೂರಿನಿಂದ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ; 180 ಪ್ರಯಾಣಿಕರು ಸುರಕ್ಷಿತತಲೆಗೆ ಗುಂಡು ಹಾರಿಸಿಕೊಂಡು ಕೆಎಲ್ಇ ಆಸ್ಪತ್ರೆಯ ಖ್ಯಾತ ವೈದ್ಯ ಡಾ.ದಿನೇಶ ಭಟ್ಕಳ ಆತ್ಮಹತ್ಯೆಇರಾನ್‌ ಯುದ್ಧದ ಕಾರಣ ಪುತ್ರನ ಮದುವೆಗೂ ಹೋಗಲಾಗುತ್ತಿಲ್ಲ: ಟ್ರಂಪ್‌ಜೂನ್‌ 18ರಂದು 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ : ಕರ್ನಾಟಕ ಸೇರಿ 10 ರಾಜ್ಯಗಳಲ್ಲಿ ಮತದಾನ