LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ತಂಗಿಯನ್ನು ಚುಡಾಯಿಸುತ್ತಿದ್ದಕ್ಕೆ ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಸಾಗರ ಬಸ್‌ ನಿಲ್ದಾಣದಲ್ಲಿ ಬಜರಂಗದಳ ಕಾರ್ಯಕರ್ತ ಸುನೀಲ‌ ಎಂಬಾತನ ಮೇಲೆ ನಡೆದಿದ್ದ ಹಲ್ಲೆಗೆ ಮಹತ್ವದ ತಿರುವು‌ ಸಿಕ್ಕಿದೆ. ನಾಲ್ಕೈದು ತಿಂಗಳಿಂದ ತನ್ನ ತಂಗಿಯನ್ನು ಚುಡಾಯಿಸುತ್ತಿದ್ದ ಸುನೀಲ‌ನನ್ನು ಮಚ್ಚಿನಿಂದ ಸಮೀರ ಎಂಬಾತ ಹೊಡೆದಿದ್ದಾನೆ ಎಂದು ಶಿವಮೊಗ್ಗ ಪೊಲೀಸ್‌ ವರಿಷ್ಠಾಧಿಕಾರಿ ಮಿಥುನ‌ ಕುಮಾರ‌ ಬಹಿರಂಗಪಡಿಸಿದ್ದಾರೆ.



ಈ ಕುರಿತು ಮಂಗಳವಾರ ಪತ್ರಿಕಾಗೋಷ್ಠಿಯಲ್ಕಿ ಅವರು ಮಾಹಿತಿ ನೀಡಿದರು. ಕಳೆದ ನಾಲ್ಕೈದು ತಿಂಗಳಿಂದ ಬಜರಂಗ ದಳದ ಕಾರ್ಯಕರ್ತ ಸುನೀಲನು ಸಮೀರ‌ ಸಹೋದರಿಯನ್ನು ಚುಡಾಯಿಸುತ್ತಿದ್ದನು. ಈ ಕುರಿತು ಸುನೀಲ‌ಗೆ ಸಮೀರನು‌ ಹಲವು ಬಾರಿ ಎಚ್ಚರಿಕೆ ಕೊಟ್ಟರೂ ಸುನೀಲ‌ ಅದನ್ನೇ ಮುಂದುವರಿಸಿದ್ದನು. ಅಲ್ಲದೇ ಸಮೀರ‌ಗೆ ಕರೆ ಮಾಡಿ ಸುನೀಲನು ಅವನ ತಂಗಿಯ ಫೋನ್‌ ನಂಬರ್‌ ಕೂಡ ಕೇಳಿದ್ದನು. ಇದರಿಂದ ಸಮೀರ‌ ಆಕ್ರೋಶಗೊಂಡಿದ್ದ. ಇಷ್ಟಾಗಿಯೂ ನಿನ್ನೆ ಬೈಕ್‌ನಲ್ಲಿ ಬಂದ ಸುನೀಲನು ಸಮೀರ‌ನನ್ನು ಆತನ ತಂಗಿಯ ವಿಷಯವಾಗಿ ಮತ್ತೆ ಕೆಣಕಿದ್ದಾನೆ. ಆಗ ಇಬ್ಬರೂ ಅಲ್ಲೇ ಬೈದಾಡಿಕೊಂಡಿದ್ದಾರೆ ಎಂದು ಮಿಥುನಕುಮಾರ ತಿಳಿಸಿದರು.



ಸಮೀರ‌ ಮೇಕೆಗಳನ್ನು ಮೇಯಿಸುತ್ತಿದ್ದ. ಅವುಗಳಿಗೆ ಸೊಪ್ಪು ಕತ್ತರಿಸಿ ಹಾಕಲು ಸದಾ ಮಚ್ಚು ಇಟ್ಟುಕೊಂಡಿರುತ್ತಿದ್ದ. ನಿನ್ನೆ ಸುನೀಲ‌ ಜತೆ ಜಗಳವಾದಾಗ ಅದೇ ಮಚ್ಚಿನಿಂದ ಹಲ್ಲೆ ನಡೆಸಲು ಯತ್ನಿಸಿದ್ದಾನೆ ಎಂದು ಜಿಲ್ಲಾ ಪೊಲೀಸ ವರಿಷ್ಠರು ಮಾಹಿತಿ ನೀಡಿದರು.



ರೀತಿಯ ವಿಚಾರಗಳಿದ್ದರೆ ಸಾರ್ವಜನಿಕರು ಪೊಲೀಸರ ಗಮನಕ್ಕೆ ತರಬೇಕು. ಈ ರೀತಿ ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಅವರು ಹೇಳಿದರು.

ಕ್ರಿಕೆಟ್ ಮ್ಯಾಚ್ ಸಂಬಂಧ ಸಮೀರ, ಇಮಿಯಾನ್, ಮನ್ಸೂರ ಎಂಬುವವರು ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದರು. ಪ್ರಕರಣದಲ್ಲಿ ಅವರಿಬ್ಬರ ಪಾತ್ರವೇನು ಎಂಬುದರ ಕುರಿತಾಗಿಯೂ ತನಿಖೆ ನಡೆಸುತ್ತಿದ್ದೇವೆ ಎಂದು ಎಸ್‌ಪಿ ಮಿಥುನ‌ ಕುಮಾರ‌ ನುಡಿದರು.



ಯುವತಿಯೊಬ್ಬಳ ಹಿಂದೆ ಬಿದ್ದು ಕಿರುಕುಳ ನೀಡಿದ ಬಜರಂಗ ದಳದ ಕಾರ್ಯಕರ್ತ ಸುನೀಲನ‌ ಪರವಾಗಿ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಮಂಗಳವಾರ ಸಾಗರ ಪಟ್ಟಣ ಬಂದ್‌ ಕರೆ ನೀಡಿವೆ. ಇದೀಗ ಪೊಲೀಸ್‌ ತನಿಖೆಯ ಮೂಲಕ ವಾಸ್ತವ ಸಂಗತಿ ಬಯಲಾಗುತ್ತಲೇ ಸಂಘ ಪರಿವಾರದ ಈ ನಡೆ ಸಾರ್ವಜನಿಕರ ತೀವ್ರ ಟೀಕೆಗೆ ಗುರಿಯಾಗಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಮಿತ ಶಾ ಭೇಟಿ : ಬೆಳಗಾವಿ ವಿಮಾನ ನಿಲ್ದಾಣದ ಸುತ್ತ 2 ಕಿ.ಮೀ. ‘ರೆಡ್ ಝೋನ್–ನೋ ಫ್ಲೈ ಝೋನ್’ಗಣೇಶ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ ಕಲ್ಲುತೂರಾಟ ಆರೋಪಯುಪಿಐ ಶುಲ್ಕಕ್ಕೆ ಅಖಿಲೇಶ ಯಾದವ ಆಕ್ರೋಶದೇಶದ ಇಂಧನ ಭದ್ರತೆ ಕಾಪಾಡಲು ಬದ್ಧಈಶ್ವರಪ್ಪ, ಯತ್ನಾಳ ಅವರನ್ನು ಬಿಜೆಪಿಗೆ ಮರಳಿ ಕರೆತರಬೇಕು: ನಿರಾಣಿ₹50 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಧಾರವಾಡ ತಹಶೀಲ್ದಾರಜಾಗತಿಕ ಚಿಪ್ ಉತ್ಪಾದನೆಯ ವಿಶ್ವಾಸಾರ್ಹ ಕೇಂದ್ರವಾಗುತ್ತಿದೆ ಭಾರತ: ಮೋದಿಬರಪೀಡಿತ ಪಟ್ಟಿಗೆ ಮತ್ತೂ 23 ತಾಲೂಕು; ಒಟ್ಟು 124ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರುಗನ್ ತೋರಿಸಿ ಬೆದರಿಸಿ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ: ಮಾಜಿ ಶಾಸಕ ಸೇರಿ ಇಬ್ಬರ ವಿರುದ್ಧ ಪ್ರಕರಣ