LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Local News

2.65 ಲಕ್ಷ ರೂ.ಗೆ ಸವಾಲಾಯ್ತು ಒಂದು ತೆಂಗಿನಕಾಯಿ!

ಬೆಳಗಾವಿ : ಸಾರ್ವಜನಿಕ ಗಣೇಶ ಮಂಡಳಿಗಳು ಸ್ಥಾಪನೆ ಮಾಡುವ ಗಣೇಶ ಮೂರ್ತಿ ಮುಂದಿಡುವ ತೆಂಗಿನಕಾಯಿ ಮತ್ತು ವಿವಿಧ ಹಣ್ಣುಗಳು ತಟ್ಟೆಗಳ ಸಮೇತ ಸಾರ್ವಜನಿಕವಾಗಿ ಹರಾಜು ಹಾಕಿ ಮುಂದಿನ ವರ್ಷದ ಹಬ್ಬಕ್ಕೆ ಹಣ ಸಂಗ್ರಹಿಸುವುದು ಉತ್ತರ ಕರ್ನಾಟಕದಲ್ಲಿ ಸಾಮಾನ್ಯ.ವಸ್ತುಗಳಲ್ಲಿ ತೆಂಗಿನಕಾಯಿಗೆ ವಿಶೇಷ ಆದ್ಯತೆ.







ಒಂದೊಂದು ತೆಂಗಿನಕಾಯಿ ಹೆಚ್ಚು ಎಂದರೆ 5,000 ಸಾವಿರ ರೂಪಾಯಿಗೆ ಸವಾಲು ಆಗಿರುತ್ತೆ. ಆದರೆ, ಕಳೆದ ವರ್ಷ ಒಂದು ತೆಂಗಿನಕಾಯಿಯಲ್ಲಿ ದಾಖಲೆ ಮೊತ್ತ 2.05 ಲಕ್ಷ ರೂಪಾಯಿಗೆ ಲೀಲಾವಾಗಿತ್ತು. ಆದರೆ ಇದೇ ದಾಖಲೆಯನ್ನು ಭಕ್ತರು ಮುರಿದಿದ್ದಾರೆ.



ಮೂಡಲಗಿ ಪಟ್ಟಣದ ವಿಜಯ ನಗರದ ಶ್ರೀ ಗಜಾನನ ಯುವಕ ಮಂಡಳಿ ಈ ವರ್ಷದ 2.65 ಲಕ್ಷ ರೂಪಾಯಿಗೆ ಸವಾಲಿನಲ್ಲಿ ಮೊದಲನೇ ಕಾಯಿ ಸವಾಲು ಮಾಡುವ ಮೂಲಕ ದಾಖಲೆ ನಿರ್ಮಿಸಿದೆ.







ಅಷ್ಟು ಮೊತ್ತ ಕೊಟ್ಟು ತೆಂಗಿನಕಾಯಿ ಪಡೆದವರು ಮೂಡಲಗಿಯವರೇ ಆದ ರಾಮು ಬಾಪು ಪಾಟೀಲ. ಗಣೇಶನ ಮುಂದೆ ಇಡಲಾಗಿದ್ದ ಫಲಗಳ ಹರಾಜಿನ ಮೂಲಕ ಮಂಡಳಿ ಈ ವರ್ಷ ಒಟ್ಟು 6.76 ಲಕ್ಷ ರೂಪಾಯಿ ಸಂಗ್ರಹಿಸಿದೆ.



ಕಳೆದ ವರ್ಷವೂ ಮೊದಲನೇ ತೆಂಗಿನಕಲಾಯಿಯನ್ನು ರಾಮಾ ಪಾಟೀಲ ಅವರೇ 2.05 ಲಕ್ಷ ರೂಪಾಯಿಗೆ ಹರಾಜಿನಲ್ಲಿ ಪಡೆದಿದ್ದರು.



ಕಳೆದ ವರ್ಷದ ಹರಾಜಿನಿಂದ 5.53 ಲಕ್ಷ ರೂಪಾಯಿ ಸಂಗ್ರಹಿಸಲಾಗಿತ್ತು. 20 ವರ್ಷದಿಂದ ಇಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಲಾಗುತ್ತಿದೆ ಎಂದು ಗಣೇಶ ಮಂಡಳಿ ಪದಾಧಿಕಾರಿಗಳು ತಿಳಿಸಿದ್ದಾರೆ.







ಇನ್ನು 2ನೇ ಟೆಂಗಿನಕಾಯಿ 81 ಸಾವಿರ ರೂಪಾಯಿಗೆ ದಾದು ಮಾರುತಿ ಕೋಳಿಗುಡ್ಡ, 3ನೇ ತೆಂಗಿನಕಾಯಿ 31 ಸಾವಿರ ರೂಪಾಯಿಗೆ ಸಾಯಿರಾಜ ಅಂಕುಶ ಕೋಮಟೆ, 4ನೇ ತೆಂಗಿನಕಾಯಿ 25,101 ರೂಪಾಯಿಗೆ ಅಶೋಕ ಲಕ್ಷ್ಮಣ ಕೋಮಟೆ, 5ನೇ ತೆಂಗಿನಕಾಯಿ 77,777 ರೂಪಾಯಿಗೆ ಶ್ರೀಧರ ಬಾಬುರಾವ ಕೋಮಟೆ, ಕುಂಭದ ಮೇಲಿನ ತೆಂಗಿನಕಾಯಿ 51 ಸಾವಿರ ರೂಪಾಯಿಗೆ ಮುತ್ತಪ್ಪ ಬಾಪು ಪಾಟೀಲ ಸವಾಲು ಮೂಲಕ ಪಡೆದುಕೊಂಡಿದ್ದಾರೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಮಿತ ಶಾ ಭೇಟಿ : ಬೆಳಗಾವಿ ವಿಮಾನ ನಿಲ್ದಾಣದ ಸುತ್ತ 2 ಕಿ.ಮೀ. ‘ರೆಡ್ ಝೋನ್–ನೋ ಫ್ಲೈ ಝೋನ್’ಗಣೇಶ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ ಕಲ್ಲುತೂರಾಟ ಆರೋಪಯುಪಿಐ ಶುಲ್ಕಕ್ಕೆ ಅಖಿಲೇಶ ಯಾದವ ಆಕ್ರೋಶದೇಶದ ಇಂಧನ ಭದ್ರತೆ ಕಾಪಾಡಲು ಬದ್ಧಈಶ್ವರಪ್ಪ, ಯತ್ನಾಳ ಅವರನ್ನು ಬಿಜೆಪಿಗೆ ಮರಳಿ ಕರೆತರಬೇಕು: ನಿರಾಣಿ₹50 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಧಾರವಾಡ ತಹಶೀಲ್ದಾರಜಾಗತಿಕ ಚಿಪ್ ಉತ್ಪಾದನೆಯ ವಿಶ್ವಾಸಾರ್ಹ ಕೇಂದ್ರವಾಗುತ್ತಿದೆ ಭಾರತ: ಮೋದಿಬರಪೀಡಿತ ಪಟ್ಟಿಗೆ ಮತ್ತೂ 23 ತಾಲೂಕು; ಒಟ್ಟು 124ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರುಗನ್ ತೋರಿಸಿ ಬೆದರಿಸಿ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ: ಮಾಜಿ ಶಾಸಕ ಸೇರಿ ಇಬ್ಬರ ವಿರುದ್ಧ ಪ್ರಕರಣ