LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಹಿಂದೂ ಯುವಕನನ್ನು ಮದುವೆಯಾಗಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನಿ ಯುವತಿಯ ಬಂಧನ

ಬೆಂಗಳೂರು:  ಉತ್ತರಪ್ರದೇಶದ ಹಿಂದೂ ಯುವಕನನ್ನು  ಮದುವೆಯಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೆಂಗಳೂರು ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಆರೋಪದ ಮೇಲೆ 19 ವರ್ಷದ ಪಾಕಿಸ್ತಾನಿ ಯುವತಿ ಇಕ್ರಾ ಜೀವನಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಕೆ ಉತ್ತರ ಪ್ರದೇಶದ 25 ವರ್ಷದ ಯುವಕನನ್ನು ಮದುವೆಯಾಗಿದ್ದಳು ಎನ್ನಲಾಗಿದ್ದು, ಆತನನ್ನೂ ಸಹ ಬಂಧಿಸಲಾಗಿದೆ.



ಇಕ್ರಾ ಜೀವನಿಯನ್ನು ಬಂಧಿಸಿ ಎಫ್‌ಆರ್‌ಆರ್‌ಒ ಅಧಿಕಾರಿಗಳಿಗೆ ಒಪ್ಪಿಸಿ ನಂತರ ಮಹಿಳೆಯರಿಗಾಗಿ ಇರುವ ಸ್ಟೇಟ್‌ ಹೋಂಗೆ ಕಳುಹಿಸಲಾಗಿದೆ. ಈಕೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಹೈದರಾಬಾದ ನಗರದ ಮೂಲದವಳು. ಅವರಿಬ್ಬರೂ ಗೇಮಿಂಗ್ ಆಪ್ ಲುಡೊ ಮೂಲಕ ಪರಸ್ಪರ ಪರಿಚಯವಾಗಿ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ನಂತರ ನೇಪಾಳಕ್ಕೆ ಅವಳನ್ನು ಕರೆಸಿಕೊಂಡಿದ್ದ ಉತ್ತರ ಪ್ರದೇಶದ 25 ವರ್ಷದ ಭದ್ರತಾ ಸಿಬ್ಬಂದಿ ಮುಲಾಯಂ ಸಿಂಗ್ ಯಾದವ್ ಅವಳನ್ನು ಅಲ್ಲಿಯೇ ಮದುವೆಯಾಗಿದ್ದ.



ಪೊಲೀಸರ ಪ್ರಕಾರ, ಇಕ್ರಾ ಜೀವನಿ ಭಾರತ-ನೇಪಾಳ ಗಡಿಯ ಮೂಲಕ ಭಾರತವನ್ನು ಪ್ರವೇಶಿಸಿದ್ದಳು. ನಂತರ ದಂಪತಿ ಬಿಹಾರದ ಬಿರ್‌ಗುಂಜ್ ಮೂಲಕ ಭಾರತಕ್ಕೆ ಗಡಿ ದಾಟಿ ಬಂದರು ಮತ್ತು ಅಲ್ಲಿಂದ ಪಾಟ್ನಾ ತಲುಪಿದರು. ಯಾದವ ಮತ್ತು ಇಕ್ರಾ ನಂತರ ಬೆಂಗಳೂರಿಗೆ ಬಂದು ಜುನ್ನಸಂದ್ರದ ಬಾಡಿಗೆ ಮನೆಯಲ್ಲಿ ತಂಗಿದ್ದರು, ಅಲ್ಲಿ ಯಾದವ ಸೆಪ್ಟೆಂಬರ್ 2022 ರಿಂದ ಖಾಸಗಿ ಕಂಪನಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಅವರ ಹೆಸರನ್ನು ರಾವಾ ಯಾದವ ಎಂದು ಬದಲಾಯಿಸಿದ ನಂತರ ಆಧಾರ ಕಾರ್ಡ್‌ ಕೂಡ ಪಡೆದಿದ್ದರು ಮತ್ತು ಭಾರತೀಯ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.



ಇಕ್ರಾ ಪಾಕಿಸ್ತಾನದಲ್ಲಿರುವ ತನ್ನ ಕುಟುಂಬವನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾಗ ಕೇಂದ್ರ ಗುಪ್ತಚರ ಸಂಸ್ಥೆಗಳ ಸ್ಕ್ಯಾನರ್ ಅಡಿಯಲ್ಲಿ ಬಂದಿದ್ದಾಳೆ. ಕೇಂದ್ರ ಏಜೆನ್ಸಿಗಳು ಕರ್ನಾಟಕ ಗುಪ್ತಚರ ಇಲಾಖೆಗೆ ಈ ಬಗ್ಗೆ ಎಚ್ಚರಿಕೆ ನೀಡಿವೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ದಂಪತಿಯನ್ನು ಬಂಧಿಸಿದ್ದಾರೆ. ಈ ಯುವತಿ ಪಾಕಿಸ್ತಾನದ ಯಾವುದೇ ಬೇಹುಗಾರಿಕೆ ರಿಂಗ್‌ನ ಭಾಗವಾಗಿದ್ದಾಳೆಯೇ ಎಂದು ಪರಿಶೀಲಿಸಲು ಹೆಚ್ಚಿನ ತನಿಖೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಎಪಿ ನಾಯಕ ದೀಪಕ ಸಿಂಗ್ಲಾ ಮನೆ ಮೇಲೆ ಇ.ಡಿ ದಾಳಿಮೇ 20ರ ಸಾರಿಗೆ ಮುಷ್ಕರ ನಿಲ್ಲದು : ನೌಕರರ ಪಟ್ಟು ಮುಸ್ಲಿಮರ 10 ಪ್ರಮುಖ ಬೇಡಿಕೆಗಳಿಗೆ ಸರಕಾರ ಸ್ಪಂದಿಸಲಿ: ಸಮಾವೇಶದಲ್ಲಿ ಒತ್ತಾಯಶಿವಂ ಅಸೋಸಿಯೇಟ್ಸ್ ಬಹುಕೋಟಿ ವಂಚನೆ : ಶಿವಾನಂದ ನೀಲಣ್ಣನವರ್‌ ಆಸ್ತಿ ಜಪ್ತಿ ಶುರುನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ : ಎನ್‌ಟಿಎ ಪ್ರಶ್ನೆಪತ್ರಿಕೆ ಸಮಿತಿಯ ಜೀವಶಾಸ್ತ್ರ ಉಪನ್ಯಾಸಕಿ ಬಂಧನಮಾಲ್ಡೀವ್ಸ್‌ನಲ್ಲಿ ಕೇವ್‌ ಸ್ಕೂಬಾ ಡೈವಿಂಗ್ ದುರಂತ : ಇಟಲಿಯ 5 ಪ್ರಜೆಗಳ ಸಾವುಮುಂಜಾಗ್ರತಾ ಕ್ರಮವಾಗಿ ಪ್ರಧಾನಿ ಏನು ಮಾಡಿದ್ದಾರೆ : ಸಚಿವೆ ಹೆಬ್ಬಾಳ್ಕರ ಪ್ರಶ್ನೆಸುದೀರ್ಘ ವಿಚಾರಣೆ ನಂತರ ಶಿವಂ ಅಸೋಸಿಯೇಟ್ಸ ಶಿವಾನಂದ‌ ನೀಲಣ್ಣವರ ಬಂಧನ : ಸಾವಿರಾರು ಕೋಟಿ ಅಕ್ರಮ ಹಣ ಸಂಗ್ರಹ ಶಂಕೆಮೋದಿ ಸರಕಾರದ ‘ಅಚ್ಚೇ ದಿನ್’ ಜನ ನೋಡಲೇ ಇಲ್ಲKoppal | ಸೇತುವೆ ಮೇಲಿಂದ ಬಿದ್ದ ಟ್ರ್ಯಾಕ್ಟರ್ : 6 ಮಂದಿ ಸಾವು