LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

20 ಸೆಕೆಂಡ್‌ ನಲ್ಲಿ 10 ಲಕ್ಷ ರೂ. ಮೌಲ್ಯದ ಆಭರಣ ಮಂಗಮಾಯ; ಚಾಲಾಕಿ ಕಳ್ಳಿಯ ಕೈಚಳಕ!

ಲಖನೌ, ೨೯- ಜ್ಯುವೆಲರಿ ಶಾಪ್ ಗಳಲ್ಲಿ ಕಳ್ಳತನ ಆಗೋದು ಇದೇ ಮೊದಲೇನಲ್ಲ. ಆದರೆ ಅದನ್ನೂ ಎಷ್ಟು ಚಾಣಾಕ್ಷ ತನದಿಂದ ಮಾಡಿದ್ದಾರೆ ಅನ್ನೋದರ ಸುದ್ದಿಯ ವಿಚಾರ. ಇಲ್ಲೊಬ್ಬ ವಯಸ್ಸಾದ ಮಹಿಳೆ ಸಲೀಸಾಗಿ ಆಭರಣ ಕದ್ದು ಅಂಗಡಿಯವರ ಅರಿವಿಗೂ ಬಾರದ ರೀತಿಯಲ್ಲಿ ಅದನ್ನು ಎತ್ತಿಕೊಂಡು ಹೋಗಿದ್ದಾಳೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗಿದೆ.



ಹೌದು, ಈ ಘಟನೆ ನಡೆದಿರೋದು ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ. ಇಲ್ಲಿರುವ ಬಲ್ದೇವ್ ಪ್ಲಾಜಾದಲ್ಲಿರುವ ಬೆಚು ಲಾಲ್ ಸರಾಫ್ ಪ್ರೈವೇಟ್ ಲಿಮಿಟೆಡ್‌ಗೆ ಮಹಿಳೆಯೊಬ್ಬರು ಭೇಟಿ ನೀಡಿದ್ದಾರೆ. ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಆಭರಣ ಕದ್ದು ಪರಾರಿಯಾಗಿದ್ದಾಳೆ. ಮೊದಲಿಗೆ ಒಂದಿಷ್ಟು ಆಭರಣದ ಬಾಕ್ಸ್ ತೆರೆಸಿ ನೋಡುತ್ತಾ ಕುಳಿತಿದ್ದ ಈಕೆ ಅದನ್ನು ಹಾಕಿ ತೋರಿಸುವಂತೆ ಅಲ್ಲಿದ್ದ ಆಭರಣ ಅಂಗಡಿಯವರಿಗೆ ಹೇಳುತ್ತಾಳೆ. ಅವರು ಕೂಡ ಹೀಗೆ ಮಾಡುತ್ತಾರೆ. ಬೇರೊಂದು ಆಭರಣ ತೋರಿಸಿ ಎಂದು ಹೇಳುತ್ತಾ ಒಂದು ಆಭರಣದ ಬಾಕ್ಸ ಅನ್ನು ಸೀರೆಯೊಳಗೆ ಮುಚ್ಚಿಕೊಳ್ತಾಳೆ.



ಯಾವಾಗ ಆಭರಣ ಸಿಕ್ತು ಅನ್ನೋದು ಗೊತ್ತಾಗ್ತಾ ಇದ್ದಂತೆ, ನನಗ್ಯಾವುದು ಇಷ್ಟ ಆಗಲಿಲ್ಲ ಎಂದು ಸಲೀಸಾಗಿ ಎದ್ದು ಹೋಗ್ತಾರೆ. ಕೇವಲ 20 ಸೆಕೆಂಡ್‌ ಕೂಡ ಆಗೋದಿಲ್ಲ. ಅಷ್ಟ ಕಡಿಮೆ ಸಮಯದಲ್ಲಿ 10 ಲಕ್ಷ ರೂ. ಮೌಲ್ಯದ ಆಭರಣ ಕದ್ದು ಪರಾರಿಯಾಗಿದ್ದಾಳೆ. ಇವಳ ಕೈ ಚಳಕ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಇದು ಅಂಗಡಿಯವರ ಗಮನಕ್ಕೂ ಬಂದಿಲ್ಲ. ಸಿಸಿ ಕ್ಯಾಮರಾ ಚೆಕ್ ಮಾಡಿದಾಗ ಗೊತ್ತಾಗಿದೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೋದಿ ಸರಕಾರದ ‘ಅಚ್ಚೇ ದಿನ್’ ಜನ ನೋಡಲೇ ಇಲ್ಲKoppal | ಸೇತುವೆ ಮೇಲಿಂದ ಬಿದ್ದ ಟ್ರ್ಯಾಕ್ಟರ್ : 6 ಮಂದಿ ಸಾವುಡಿಸೇಲ್ ದರ ಏರಿಕೆ ಹೊಡೆತದ ಮೇಲೆ ಖಾಸಗಿ ಬಸ್ ಟಿಕೆಟ್ ದರ ಭಾರಿ ಹೆಚ್ಚಳದ ಪ್ರಹಾರಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಇಂಧನ ಬೆಲೆ ಇಳಿದಾಗ ಲಕ್ಷಾಂತರ ಕೋಟಿ ಲಾಭ ಮಾಡಿಕೊಂಡ ಕಂಪನಿಗಳಿಂದ ಈಗ ಜನರ ಮೇಲೆ ಮತ್ತಷ್ಟು ಹೊರೆ2027ರಿಂದ ಕಂಪ್ಯೂಟರ್‌ ಆಧಾರಿತ ನೀಟ್‌ ಪರೀಕ್ಷೆಅದಾನಿ ಉಳಿಸಲು ಅಮೇರಿಕದೊಂದಿಗೆ ರಾಜಿ: ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿಯುಎಇ ಸೇರಿ 5 ರಾಷ್ಟ್ರಗಳಿಗೆ ಪ್ರಧಾನಿ ಮೋದಿ ಪ್ರವಾಸಪೆಟ್ರೋಲ್‌-ಡೀಸೆಲ್‌ ದರ ಏರಿಕೆ ಹಿಂಪಡೆಯಲು ಸಿದ್ದರಾಮಯ್ಯ ಒತ್ತಾಯಜಾಮೀನು ನಿರಾಕರಣೆ: ನಟ ದರ್ಶನ್‌ಗೆ ಜೈಲೇ ಗತಿಭಾರಿ ಗಾಳಿ-ಮಳೆಗೆ ಮನೆ ಗೋಡೆ ಕುಸಿತ: ಒಂದೇ ಕುಟುಂಬದ 4 ಮಂದಿ ಸಾವು